ಒಡಲಲ್ಲೊಂದು ಕುಡಿ
ಚಿಗುರಲಿಲ್ಲವೆಂದೇಕೆ
ಹಲುಬುವಿರಿ, ಕುಡಿ
ಗಾಗಿ ಹಂಬಲಿಸಿ ಕೊರಗಿ
ಸೊರಗಿ ಬಾಳನ್ನೇಕೆ
ವ್ಯರ್ಥಗೊಳಿಸಿ ಶೂನ್ಯ
ವನ್ನಾಗಿಸುವಿರಿ
ನಿಮ್ಮದೇನು ರಘುವಂಶ
ಸೂರ್ಯವಂಶವೇ
ಕುಲದೀಪಕನಿಲ್ಲದೆ
ವಂಶ ಅಳಿಯತೆನಲು
ಒಡಲು ಬರಿದಾಗಿಸಿದ
ಆ ದೈವಕೆ ಸಡ್ಡು ಹೊಡೆದು
ನಿಮ್ಮ ಹೃದಯವನ್ನೊಮ್ಮೆ
ವಿಶಾಲಗೊಳಿಸಿ
ಮಮತೆ
ಮರೀಚಿಕೆಯಾಗಿರುವ ಕಂದಮ್ಮಗಳತ್ತ
ದೃಷ್ಠಿಹಾಯಿಸಿ, ತರುವಿಲ್ಲದ ಲತೆಗಳಿಗೆ
ಆಶ್ರಯವಾಗಿ ಬರಿದಾದ ಮಡಿಲ ತುಂಬಿಸಿಕೊಳ್ಳಿ
ಒಡಲು ಬರಿದಾದರೇನು
ಮಡಿಲು ಬರಿದೇ
ಯಾರದೋ ತಪ್ಪಿಗೆ
ಬಲಿಯಾಗಿ ಪರಿತಪಿಸುವ
ಕಂದನಿಗೆ, ಶಾಪವಾಗಿರುವ
ಬಾಳಿಗೆ ವರನೀಡಿ
ಯಾರ ಮನೆಯ ಅಂಗಳದ
ಹೂವೋ ಎಂದು ಜಿಗುಪ್ಸೆ
ತೋರದೆ ಕರೆದೊಯ್ಯಿರಿ ನಿಮ್ಮರ ಮನೆಗೆ
*****
Related Post
ಸಣ್ಣ ಕತೆ
-
ಮೃಗಜಲ
"People are trying to work towards a good quality of life for tomorrow instead of living for today, for many… Read more…
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
-
ದೊಡ್ಡವರು
ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…
-
ಉಪ್ಪು
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…